GKPersons and PersonaltySpardha Times

ನ್ಯಾಯನಿಪುಣ ಫಾಲಿ ಸ್ಯಾಮ್ ನಾರಿಮನ್

Share With Friends

ಫಾಲಿ ಸ್ಯಾಮ್ ನಾರಿಮನ್ (ಜನವರಿ 1929 10 ಜನನ) ಅವರು ಭಾರತದ ವಿಶಿಷ್ಠ ಸಂವಿಧಾನಾತ್ಮಕ ನ್ಯಾಯಾಧೀಶ ಆಗಿದ್ದಾರೆ. 1971 ರಿಂದ ಭಾರತದ ಸರ್ವೋಚ್ಛ ನ್ಯಾಯಾಲಯದ ಹಿರಿಯ ವಕೀಲ ಮತ್ತು 1991 ರಿಂದ ಭಾರತದ ಬಾರ್ ಅಸೋಸಿಯೇಶನ್ ಅಧ್ಯಕ್ಷರು. ನಾರಿಮನ್ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಾದ ಬಗೆಹರಿಸಲು ಅಂತಾರಾಷ್ಟ್ರೀಯ ಮಟ್ಟದ ಸಂಧಾನಕಾರ.ಅವರು ಭಾರತದ ಅತ್ಯಂತ ವಿಶೇಷ ಸಾಂವಿಧಾನಿಕ ವಕೀಲರಲ್ಲಿ ಒಬ್ಬರು. ಅವರು ಹಲವಾರು ಪ್ರಮುಖ ಸಂದರ್ಭಗಳಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಅವರು ಮೇ ಜೂನ್ 1975 1972- ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದರು.

ಅವರಿಗೆ 1991 ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿತು. ಮತ್ತೆ ಪದ್ಮ ವಿಭೂಷಣ 2007ರಲ್ಲಿ ಮತ್ತು ಜಸ್ಟೀಸ್ ಗ್ರುಬರ್ ಪ್ರಶಸ್ತಿಯನ್ನು, 2002ರಲ್ಲಿ ಕೊಡಲ್ಪಟ್ಟಿದೆ. ಭಾರತ ಪಾರ್ಲಿಮೆಂಟ್‍ನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ನಾಮಕರಣ ಉಳಿದಿದೆ ಒಂದು ಅವಧಿಗೆ ಸದಸ್ಯ ಪದ (1999-2005)ಹೊಂದಿದ್ದರು. ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಬಾರ್‌ ಕೌನ್ಸಿಲ್‌ನಿಂದ ನ್ಯಾಯಪೀಠಕ್ಕೆ ಏರಿದ ನಾಲ್ಕನೇ ಹಿರಿಯ ವಕೀಲರು ಆಗಿದ್ದಾರೆ. ನ್ಯಾಯಮೂರ್ತಿ ನಾರಿಮನ್‌ ಏಳು ವರ್ಷದ ಅಧಿಕಾರಾವಧಿ ಇಂದಿಗೆ (ಆಗಸ್ಟ್ 12,08-2021ಕ್ಕೆ) ಕೊನೆಗೊಳ್ಳುತ್ತದೆ. 2014 ರ ಜುಲೈ 7 ರಂದು ರೋಹಿಂಟನ್ ಫಾಲಿ ನಾರಿಮನ್‌ರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲಾಗಿತ್ತು.

# ಬಾಲ್ಯ , ಶಿಕ್ಷಣ ಮತ್ತು ವೈಯಕ್ತಿಕ ಜೀವನ : 
ಎರಡನೇ ವಿಶ್ವಯುದ್ಧದಲ್ಲಿ ಜಪಾನೀಯರು ಬರ್ಮಾ (ಈಗಿನ ಮ್ಯಾನ್ಮಾರ್‌) ದೇಶದ ರಾಜಧಾನಿಯಾಗಿದ್ದ ರಂಗೂನಿನ (ಈಗಿನ ಯಾಂಗೂನ್) ಮೇಲೆ ಬಾಂಬ್‌ ದಾಳಿ ಮಾಡಿದ್ದರಿಂದ, ರಂಗೂನಿನಲ್ಲಿ ನೆಲೆಸಿದ್ದ ನಾರಿಮನ್ ಪಾರ್ಸಿ ಕುಟುಂಬ ಈ ಬಾಂಬ್‌ ದಾಳಿಯ ಕಾರಣದಿಂದಾಗಿ ಭಾರತಕ್ಕೆ ಬಂದು ನೆಲೆಸುತ್ತದೆ. 1929ರಲ್ಲಿ ರಂಗೂನ್‌ನಲ್ಲಿ ಜನಿಸಿದ ಫಾಲಿ ಸ್ಯಾಮ್ ನಾರಿಮನ್ ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ ಹೀಗೆ ಭಾರತಕ್ಕೆ ಬರುತ್ತಾರೆ. ತಂದೆ ಸ್ಯಾಮ್ ಬರಿಯಾಮ್ಜೀ ನಾರಿಮನ್, ತಾಯಿ ಬಾನೂ ನಾರಿಮನ್. ಶಿಮ್ಲಾದಲ್ಲಿ ಶಾಲೆ ಮತ್ತು ಮುಂಬಯಿನಲ್ಲಿ ಪದವಿ ಶಿಕ್ಷಣ. ಮಗನನ್ನು ಐ.ಸಿ.ಎಸ್. ಅಧಿಕಾರಿ ಮಾಡಬೇಕೆಂಬುದು ಅವರ ತಂದೆಯ ಮಹದಾಸೆ. ಲಂಡನ್ನಿಗೆ ಕಳುಹಿಸುವಷ್ಟು ಹಣ ಅವರ ಬಳಿ ಇರುವುದಿಲ್ಲ, ಹೀಗಾಗಿ ಆ ಆಸೆ ಈಡೇರುವುದಿಲ್ಲ. ಗಣಿತ ಮತ್ತು ವಿಜ್ಞಾನ ತಲೆಗೆ ಹತ್ತುವುದಿಲ್ಲ. ಬಿ.ಎ. ಪದವಿ ಪೂರೈಸಿ ಕಾನೂನು ವ್ಯಾಸಂಗ ಮಾಡುತ್ತಾರೆ.

ರಂಗೂನ್ ಪಾರ್ಸಿ ಪೋಷಕರು ಸ್ಯಾಮ್ ಬರಿಯಾಮ್‍ಜಿ ನಾರಿಮನ್ ಮತ್ತು ಬಾನೂ ನಾರಿಮನ್ ಅವರಿಗೆ 1929 ರಲ್ಲಿ ಜನಿಸಿದ ಫಾಲಿ, ಬಿಷಪ್ ಕಾಟನ್ ಸ್ಕೂಲ್, ಶಿಮ್ಲಾ ತನ್ನ ಶಾಲಾಶಿಕ್ಷಣವನ್ನು ಮಾಡಿದರು. ನಂತರ ಅವರು ಸೇಂಟ್ ಕ್ಸೇವಿಯರ್ ಕಾಲೇಜಿನ ಬಾಂಬೆಯಲ್ಲಿ (ಈಗ ಮುಂಬಯಿ), ಅರ್ಥಶಾಸ್ತ್ರ ಹಾಗು ಇತಿಹಾಸ-ಹಿಸ್ಟರಿಯಲ್ಲಿ, 1950ರಲ್ಲಿ ಬಿ.ಎ (ಆನರ್ಸ) ಅಧ್ಯಯನ ಮಾಡಿ, ಸರ್ಕಾರಿ ಕಾನೂನು ಕಾಲೇಜು, ಮುಂಬಯಿನಲ್ಲಿ ಕಾನೂನು ಪದವಿ (LL.B.)ಮಾಡಿದರು. ನಂತರ , ವಕೀಲರ (ಅಡ್ವೊಕೇಟ್)ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು. ಅದಕ್ಕಾಗಿ ಕಿನ್‍ಲಾಕ್ (KinlockKinlock Forbes Gold Medal) ಫೋರ್ಬ್ಸ್ ಚಿನ್ನದ ಪದಕ ಪಡೆದರು,ಮತ್ತು ಪ್ರಶಸ್ತಿ ರೋಮನ್ ಲಾ & ಜ್ಯೂರಿಸ್ಪ್ರೂಡೆನ್ಸ್ ನಲ್ಲಿ ಪ್ರಶಸ್ತಿ ಗಳಿಸಿದರು. ನಾರಿಮನ್ ಬಾಂಬೆ ಹೈ ಕೋರ್ಟ್‍ನಲ್ಲಿ ತನ್ನ ಕಾನೂನು ವೃತ್ತಿ ಆರಂಭಿಸಿದರು. 22 ವರ್ಷಗಳ ಅಭ್ಯಾಸದ ನಂತರ, ಅವರು 1971 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ವಕೀಲರನ್ನಾಗಿ ನೇಮಿಸಲಾಯಿತು.

# ವೃತ್ತಿಜೀವನ : 
* ಇತಿಹಾಸ, ತತ್ತ್ವಶಾಸ್ತ್ರ, ಸಾಹಿತ್ಯ ಮತ್ತು ವಿಜ್ಞಾನದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿರುವ ನ್ಯಾಯಮೂರ್ತಿ ನಾರಿಮನ್ ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಹಲವಾರು ಗಮನಾರ್ಹ ತೀರ್ಪುಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವು ನಾರಿಮನ್‌ ಕಿರಿಯ ನ್ಯಾಯಾಧೀಶರಾಗಿದ್ದಾಗ ನೀಡಿದ ತೀರ್ಪುಗಳಾಗಿದೆ. ಅನೇಕ ಸಂವಿಧಾನ ಪೀಠಗಳ ಸದಸ್ಯರಾಗಿ, ಕೆಲವು ಮಹತ್ವದ ತೀರ್ಪುಗಳಿಗೆ ನಾರಿಮನ್‌ ಕೊಡುಗೆ ದೇಶದ ವಿಕಸಿಸುತ್ತಿರುವ ನ್ಯಾಯಶಾಸ್ತ್ರದ ಇತಿಹಾಸದಲ್ಲಿ ಉಳಿಯಳಿದೆ.

* ನ್ಯಾಯಮೂರ್ತಿ ನಾರಿಮನ್ 1979 ರಲ್ಲಿ ವಕೀಲರಾಗಿ ಸೇರಿಕೊಂಡರು. ಶ್ರೀರಾಮ ಕಾಲೇಜ್ ಆಫ್ ಕಾಮರ್ಸ್ (ಎಸ್‌ಆರ್‌ಸಿಸಿ) ನಿಂದ ವಾಣಿಜ್ಯ ಪದವೀಧರರಾಗಿರುವ ನ್ಯಾಯಾಧೀಶರು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಕಾನೂನು ಅಧ್ಯಯನ ಮಾಡಿದರು. ನಂತರ ಹಾರ್ವರ್ಡ್ ಕಾನೂನು ಶಾಲೆಯಿಂದ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು ದೃಢವಾದ ಕ್ರಮದ ಕುರಿತು ತಮ್ಮ ಪ್ರಬಂಧವನ್ನು ಬರೆದರು. ಭಾರತೀಯ ಮತ್ತು ಯುಎಸ್ ಸಾಂವಿಧಾನಿಕ ಕಾನೂನಿನ ನಡುವಿನ ಹೋಲಿಕೆ (a comparison between the Indian and US constitutional law) ನಾರಿಮನ್‌ರ ಪ್ರಬಂಧವಾಗಿದೆ.

* ನಾರಿಮನ್‌ ಬಾರ್‌ನೊಂದಿಗೆ 35 ವರ್ಷಗಳ ಅನುಭವವನ್ನು ಹೊಂದಿದ್ದಾರೆ, ಈ ಸಮಯದಲ್ಲಿ ನ್ಯಾಯಮೂರ್ತಿ ನಾರಿಮನ್ ಸಂವಿಧಾನ ಪೀಠದ ಮುಂದೆ ಸೇರಿದಂತೆ ಹಲವಾರು ಪ್ರಕರಣಗಳನ್ನು ವಾದಿಸಿದರು. ಮತ್ತು 500 ಕ್ಕಿಂತಲೂ ಹೆಚ್ಚು ವರದಿಯಾದ ಸುಪ್ರೀಂ ಕೋರ್ಟ್ ತೀರ್ಪುಗಳು ನಾರಿಮನ್‌ಗೆ ಸಲ್ಲುತ್ತದೆ. ನಾರಿಮನ್‌ ಉನ್ನತಿಯು ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಯುವಕರಿಗೆ “ಹೆಮ್ಮೆಯ ವಿಷಯ” ವಾಗಿದೆ.

* ನ್ಯೂಯಾರ್ಕ್‌ನಲ್ಲಿ ಹೈಟ್ ಗಾರ್ಡನರ್, ಪೂವರ್‌ ಆಂಡ್‌ ಹ್ಯಾವನ್ಸ್‌ನಲ್ಲಿ ಒಂದು ವರ್ಷ ಕಾಲ ಕಡಲ ಕಾನೂನನ್ನು ಅಭ್ಯಾಸ ಮಾಡಿದರು. ಸುಪ್ರೀಂ ಕೋರ್ಟ್ ನಾರಿಮನ್‌ರನ್ನು ಹಿರಿಯ ವಕೀಲರನ್ನಾಗಿ ನೇಮಿಸಿದಾಗ ನಾರಿಮನ್‌ರಿಗೆ ಕೇವಲ 37 ವರ್ಷ ವಯಸ್ಸಾಗಿತ್ತು. ಆಗಿನ ಮುಖ್ಯ ನ್ಯಾಯಾಧೀಶ ವೆಂಕಟಾಚಲಯ್ಯ ಕಡ್ಡಾಯ 45 ರ ವಿರುದ್ಧ ಆ ಚಿಕ್ಕ ವಯಸ್ಸಿನಲ್ಲಿ ನಾರಿಮನ್‌ರನ್ನು ಹಿರಿಯ ವಕೀಲರನ್ನಾಗಿ ಮಾಡುವ ಸಲುವಾಗಿ ನಿಯಮಗಳನ್ನು ತಿದ್ದುಪಡಿ ಮಾಡಿದರು. ವಕೀಲರಾಗಿ, ನ್ಯಾಯಮೂರ್ತಿ ನಾರಿಮನ್ 2011 ರಲ್ಲಿ ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಭಾರತದ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು, ಆದರೆ ಆಗಿನ ಕಾನೂನು ಸಚಿವ ಅಶ್ವನಿ ಕುಮಾರ್ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ರಾಜೀನಾಮೆ ನೀಡಿದರು.

# ನಾರಿಮನ್‌ ಜೀವನದ ಕೆಲವು ಮಹತ್ವದ ತೀರ್ಪುಗಳು : 
* ನಾರಿಮನ್‌ ತನ್ನ ಕಾರ್ಯನಿರ್ವಹಣೆಯ ಅವಧಿಯಲ್ಲಿ ಹಲವಾರು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಅವುಗಳಲ್ಲಿ ತ್ರಿವಳಿ ತಲಾಖ್‌, ಶಬರಿಮಲೆ, ಅನೈತಿಕ ಸಂಬಂಧ ಪ್ರಕರಣ, ಸಲಿಂಗ ಕಾಮದ ಪ್ರಕರಣ ಸೇರಿದೆ. ಈ ಎಲ್ಲಾ ತೀರ್ಪುಗಳು ದೇಶದಲ್ಲಿ ಭಾರೀ ಸಂಚಲನವನ್ನೂ ಮೂಡಿಸಿದ್ದರೂ ಕೂಡಾ ನಾರಿಮನ್‌ ಮಾತ್ರ ತನ್ನ ತೀರ್ಪಿನಲ್ಲಿ ಪ್ರಬುದ್ಧವಾಗಿ ಸಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸಿದ್ದಾರೆ ಹಾಗೂ ಮಾನವ ಹಕ್ಕುಗಳನ್ನು ಉಲ್ಲೇಖ ಮಾಡಿದ್ದಾರೆ.

* ಶಬರಿಮಲೆ ತೀರ್ಪು :
ಶಬರಿಮಲೆ ತೀರ್ಪಿನಲ್ಲಿ ”ಅಯ್ಯಪ್ಪನ ಆರಾಧಕರು ಪ್ರತ್ಯೇಕ ಧಾರ್ಮಿಕ ಪಂಗಡವನ್ನು ಹೊಂದಿಲ್ಲ” ಎಂದು ಹೇಳಿದ ನ್ಯಾಯಮೂರ್ತಿ, ಅಯ್ಯಪ್ಪ ಮೂರ್ತಿಯನ್ನು ಪೂಜಿಸುವ ಹಿಂದೂಗಳೆಂದು ಕರೆದರು. ಹೀಗಾಗಿ ಕಲಂ 26 ರ ಅಡಿಯಲ್ಲಿ ಶಬರಿಮಲೆ ದೇವಾಲಯದ ಪಂಗಡದ ಸ್ವಾತಂತ್ರ್ಯವು ಆರ್ಟಿಕಲ್ 25 (2) (ಬಿ) ಅಡಿಯಲ್ಲಿ ರಾಜ್ಯದ ಸಾಮಾಜಿಕ ಸುಧಾರಣೆಯ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಹೇಳಿದರು. ದೇವಸ್ಥಾನದಿಂದ ಮಹಿಳೆಯರನ್ನು ಹೊರಗಿಡುವುದು ಪರಿಣಾಮಕಾರಿಯಾಗಿ ಆರ್ಟಿಕಲ್ 25 ರ ಅಡಿಯಲ್ಲಿ ಮಹಿಳೆಯರ ಹಕ್ಕನ್ನು ಅರ್ಥಹೀನಗೊಳಿಸಿದೆ ಎಂದು ಘೋಷಿಸಿದರು. ಕಲಂ 25 (1) ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಲು ಮತ್ತು ಪೂಜಾ ಸ್ವಾತಂತ್ರ್ಯವನ್ನು ಚಲಾಯಿಸಲು 10-50 ವರ್ಷದೊಳಗಿನ ಮಹಿಳೆಯರ ಮೂಲಭೂತ ಹಕ್ಕನ್ನು ರಕ್ಷಿಸುತ್ತದೆ ಎಂದು ಒತ್ತಿ ಹೇಳಿದರು. ಶಬರಿಮಲೆಯಿಂದ ಮಹಿಳೆಯರನ್ನು ಹೊರಗಿಡುವುದು ಕಲಂ 25 (1) ಅನ್ನು ಉಲ್ಲಂಘಿಸಿದೆ ಎಂದು ತೀರ್ಮಾನಿಸಲು ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದರು. ಶಬರಿಮಲೆ ದೇವಸ್ಥಾನದಿಂದ 10-50 ವರ್ಷದೊಳಗಿನ ಮಹಿಳೆಯರನ್ನು ಹೊರಗಿಡುವ ಅಯ್ಯಪ್ಪನ ಸಂಪ್ರದಾಯವು ಅಸಂವಿಧಾನಿಕ ಎಂದು ತೀರ್ಮಾನಿಸಿದರು. 1965 ರ ಕೇರಳ ಹಿಂದೂ ಸಾರ್ವಜನಿಕ ಆರಾಧನಾ ಸ್ಥಳಗಳ (ಪ್ರವೇಶದ ದೃಢೀಕರಣ) ನಿಯಮಗಳ ನಿಯಮ 3 (ಬಿ) ಯನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಿದರು.

* ತ್ರಿವಳಿ ತಲಾಖ್‌ ತೀರ್ಪು :
ಇನ್ನು ಮುಸ್ಲಿಂ ಧರ್ಮದಲ್ಲಿ ಪಾಲಿಸಲಾಗುತ್ತಿದ್ದ ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ತೀರ್ಪು ನೀಡಿದ ನಾರಿಮನ್‌ ಹಾಗೂ ಲಲಿತ್‌ರನ್ನು ಒಳಗೊಂಡ ಪೀಠ, ಈ ತ್ರಿವಳಿ ತಲಾಖ್‌ ಅಸಂವಿಧಾನಿಕ ಎಂದು ತಿಳಿಸಿದರು. ಸುಮಾರು 400 ಪುಟಗಳ ತೀರ್ಪನ್ನು ಬರೆದಿದ್ದಾರೆ. ಹಾಗೆಯೇ ತ್ರಿವಳಿ ತಲಾಖ್‌ ನೀಡಿದರೆ ಮೂರು ವರ್ಷಕ್ಕೂ ಅಧಿಕ ಕಾಲ ಜೈಲು ಹಾಗೂ ದಂಡ ವಿಧಿಸಬಹುದಾಗಿದೆ. ಮುಸ್ಲಿಂ ಹಾಗೂ ಹಿಂದೂ ಧಾರ್ಮಿಕ ಮಹಿಳೆಯರ ವಿಚಾರದಲ್ಲಿ ತ್ರಿವಳಿ ತಲಾಖ್‌ ಹಾಗೂ ಶಬರಿಮಲೆ ತೀರ್ಪುಗಳು ದೇಶದಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿದೆ.

# ಕರ್ನಾಟಕದ ಕಾವೇರಿ ವಿವಾದದಲ್ಲಿ ವಕೀಲರ ಮುಖ್ಯಸ್ಥರಾಗಿ ನಾರಿಮನ್
* ಕಳೆದ 25ಕ್ಕೂ ಅಧಿಕ ವರ್ಷಗಳಿಂದ ಜಲ ವಿವಾದಗಳಲ್ಲಿ ಕರ್ನಾಟಕದ ಪರ ವಾದ ಮಂಡಿಸುತ್ತಿರುವ ನಾರಿಮನ್‌ ಅವರಿಗೆ ಈಗ 87 ವರ್ಷ ವಯಸ್ಸು. ಅವರೊಂದಿಗೇ ತಂಡದಲ್ಲಿರುವ ಅನಿಲ್‌ ದಿವಾನ್‌ ಅವರೂ ಅವರ ಸಮಕಾಲೀನರು.ನ್ಯಾಯಾಲಯ 2007ರಿಂದ ಇದುವರೆಗೆ ವಿಚಾರಣೆ ನಡೆಸಿ, ವಾದ, ಪ್ರತಿವಾದ ಆಲಿಸಿದ್ದು, ಇಡೀ ಪ್ರಕರಣಕ್ಕೆ ಕೊನೆ ಹಾಡುವ ಕಾಲ ಈಗ ಕೂಡಿಬಂದಿದೆ. ಪ್ರಕರಣದ ಒಳ– ಹೊರಗನ್ನು ಕೂಲಂಕಷವಾಗಿ ಬಲ್ಲ ನಾರಿಮನ್‌ ಅವರನ್ನು ಈ ಹಂತದಲ್ಲಿ ಬದಲಿಸುವುದು ಕೂಡದು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅಭಿಪ್ರಾಯ, ರಾಷ್ಟ್ರ ಕಂಡ ಅತ್ಯುತ್ತಮ ವಕೀಲರಲ್ಲಿ ನಾರಿಮನ್‌ ಸಹ ಒಬ್ಬರಾಗಿದ್ದಾರೆ. ಅಂಥವರು ನಮಗೆ ಸಿಕ್ಕಿರುವುದು ಅದೃಷ್ಟ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಿಗೂ ಅವರೆಂದರೆ ಗೌರವ.

* ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರುಗಳಿಗೆ ಹೆಚ್ಚಿಸುವ ಸಂಬಂಧದ ವ್ಯಾಜ್ಯವನ್ನು ಕರ್ನಾಟಕಕ್ಕೆ ಗೆದ್ದು ಕೊಟ್ಟದ್ದು ಇದೇ ನಾರಿಮನ್ ತಂಡ. ತಮಿಳುನಾಡಿಗೆ ಕರ್ನಾಟಕ ಪ್ರತಿವರ್ಷ ಬಿಡುಗಡೆ ಮಾಡಬೇಕಿದ್ದ ಕಾವೇರಿ ನದಿ ನೀರಿನ ಭಾರವನ್ನು 380 ಟಿ.ಎಂ.ಸಿ. ಅಡಿಗಳಿಂದ 192 ಟಿ.ಎಂ.ಸಿ. ಅಡಿಗಳಿಗೆ ಇಳಿಸಿಕೊಟ್ಟ ಸಾಧನೆಯೂ ಇದೇ ನಾರಿಮನ್ ಅವರದು

error: Content Copyright protected !!