Current AffairsLatest Updates

ಕೇಂದ್ರ ಗುಪ್ತಚರ ಇಲಾಖೆ(Intelligence Bureau) ಮುಖ್ಯಸ್ಥ ತಪನ್ ಕುಮಾರ್ ದೇಕಾ ಅವರ ಅವಧಿ 1 ವರ್ಷ ವಿಸ್ತರಣೆ

Share With Friends

Tenure of Intelligence Bureau chief Tapan Kumar Deka extended by a year

ಕೇಂದ್ರ ಗುಪ್ತಚರ ಇಲಾಖೆ (Intelligence Bureau)ಮುಖ್ಯಸ್ಥ ತಪನ್ ಕುಮಾರ್ ದೇಕಾ (Tapan Kumar Deka) ಅವರ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಭಯೋತ್ಪಾದನಾ ನಿಗ್ರಹ ತಜ್ಞನಿಗೆ ಎರಡನೇ ಬಾರಿಗೆ ಒಂದು ವರ್ಷದ ವಿಸ್ತರಣೆಯನ್ನು ನೀಡಲಾಗಿದೆ. ದೇಕಾ ಅವರನ್ನು 2026ರ ಜೂನ್‌ ವರೆಗೆ ಗುಪ್ತಚರ ಇಲಾಖೆ (Intelligence Bureau) ಮುಖ್ಯಸ್ಥರಾಗಿ ಮುಂದುವರಿಯಲಿದ್ದು ಮುಂದಿನ ಆದೇಶದವರೆಗೆ ಅವರ ಅವಧಿ ವಿಸ್ತರಿಸಲಾಗಿದೆ ಎಂದು ಕ್ಯಾಬಿನೆಟ್‌ ನೇಮಕಾತಿ ಸಮಿತಿ ಮಂಗಳವಾರ ತನ್ನ ಆದೇಶದಲ್ಲಿ ತಿಳಿಸಿದೆ.

ಹಿಮಾಚಲ ಪ್ರದೇಶ ಕೇಡರ್‌ನ ತಪನ್ ಡೆಕಾ 1998ನೇ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವಾ (ಐಪಿಎಸ್) ಅಧಿಕಾರಿ. 2025ರ ಜೂನ್ 30ಕ್ಕೆ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಬೇಕಿತ್ತು. ಈಗ ಜೂನ್ 2026 ರವರೆಗೆ ಒಂದು ವರ್ಷದ ಅವಧಿಗೆ ಗುಪ್ತಚರ ಇಲಾಖೆಯ ನಿರ್ದೇಶಕರಾಗಿ ಡೆಕಾ ಅವರ ಅಧಿಕಾರಾವಧಿ ವಿಸ್ತರಿಸಲು ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Highlights :
*ಭಯೋತ್ಪಾದನಾ ನಿಗ್ರಹ ತಜ್ಞ ತಪನ್ ಕುಮಾರ್ ದೇಕಾ ಅವರಿಗೆ ಇದು ಎರಡನೇ ಬಾರಿಗೆ ಒಂದು ವರ್ಷದ ವಿಸ್ತರಣೆ
*2025ರ ಜೂನ್ 30ಕ್ಕೆ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಬೇಕಿತ್ತು.
*ದೇಕಾ ಅವರನ್ನು 2026ರ ಜೂನ್‌ ವರೆಗೆ ಗುಪ್ತಚರ ಇಲಾಖೆ (Intelligence Bureau) ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.
*ದೇಕಾ ಅವರು 1988-ಬ್ಯಾಚ್ ಇಂಡಿಯನ್ ಪೊಲೀಸ್ ಸೇವೆ (ಐಪಿಎಸ್) ಹಿಮಾಚಲ ಪ್ರದೇಶದ ಕೇಡರ್‌ನ ಅಧಿಕಾರಿ

ದೇಕಾ ಅವರು 1988-ಬ್ಯಾಚ್ ಇಂಡಿಯನ್ ಪೊಲೀಸ್ ಸೇವೆ (ಐಪಿಎಸ್) ಹಿಮಾಚಲ ಪ್ರದೇಶದ ಕೇಡರ್‌ನ ಅಧಿಕಾರಿಯಾಗಿದ್ದು, ಭಯೋತ್ಪಾದನೆ ಮತ್ತು ಆಮೂಲಾಗ್ರೀಕರಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆ ಹೊತ್ತಿನಲ್ಲಿ ಪಾಕಿಸ್ತಾನದಲ್ಲಿ ಮೂಲದೊಂದಿಗೆ ಭಯೋತ್ಪಾದನಾ ವಿರೋಧಿ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಅವರು ಪರಿಣತರಾಗಿದ್ದಾರೆ.

Read this also : ಮಿಜೋರಾಂ (Mizoram) ಭಾರತದ ಮೊದಲ ಸಂಪೂರ್ಣ ಸಾಕ್ಷರತೆ ರಾಜ್ಯವಾಗಿ ಘೋಷಣೆ

2022 ರ ಜೂನ್‌ ತಿಂಗಳಲ್ಲಿ ಇವರನ್ನು ಎರಡು ವರ್ಷಗಳ ಅವಧಿಗೆ ಗುಪ್ತಚರ ಬ್ಯೂರೋದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. 2024 ರ ಜೂನ್‌ನಲ್ಲಿ ಒಂದು ವರ್ಷದವರೆಗೆ ಅವಧಿ ವಿಸ್ತರಿಸಲಾಗಿತ್ತು. ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ದೇಕಾ ಎರಡು ದಶಕಗಳ ಕಾಲ ಐಬಿಯ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾಗಿದ್ದರು.

2008 ರಲ್ಲಿ ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಅವರು ಪ್ರತಿ-ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು. 2000 ರ ದಶಕದಲ್ಲಿ ದೇಶದಲ್ಲಿ ಹಲವಾರು ಭಯೋತ್ಪಾದಕ ದಾಳಿಗೆ ಕಾರಣವಾದ ಭಾರತೀಯ ಮುಜಾಹಿದ್ದೀನ್ ವಿರುದ್ಧದ ಕಾರ್ಯಾಚರಣೆಗಳನ್ನು ಮುನ್ನಡೆಸಿದ್ದರು.

error: Content Copyright protected !!