HistorySpardha Times

ಇತಿಹಾಸ : 6ನೇ ತರಗತಿ ಸಮಾಜ ವಿಜ್ಞಾನ

Share With Friends

1) ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ? – 1674 ರಲ್ಲಿ.
2) ಶಿವಾಜಿಯ ಪಟ್ಟಾಭಿಷೇಕವಾದದ್ದು ಎಲ್ಲಿ? – ರಾಯಗಡದಲ್ಲಿ.
3) ಯೇಸು ಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿರುವುದು ಯಾವುದರಲ್ಲಿ? -ಬೈಬಲ್ ನಲ್ಲಿ.
4) ಯೇಸುಕ್ರಿಸ್ತ ಜನಿಸಿದ್ದು ಎಲ್ಲಿ? – ಬೆತ್ಲಹೆಂ ನಲ್ಲಿ.
5) ‘ಬೆತ್ಲಹೆಂ’ ಯಾವ ದೇಶದಲ್ಲಿದೆ? – ಇಸ್ರೇಲ್.
6) ಯೇಸುಕ್ರಿಸ್ತನ ತಾಯಿಯ ಹೆಸರೇನು? – ಮೇರಿ.
7) ಕುರಾನ್ ಯಾವ ಭಾಷೆಯಲ್ಲಿದೆ? – ಅರೇಬಿಕ್.
8) ಇಸ್ಲಾಂ ಪದದ ಅರ್ಥವೇನು? – ಶರಣಾಗತಿ ಎಂದರ್ಥ.
9) ಮುಸ್ಲಿಂ ಎಂದರೆ —–. – ದೇವರಿಗೆ ಶರಣರಾದವರು.
10) ಮಹಮ್ಮದ್ ರ ಉತ್ತರಾಧಿಕಾರಿಗಳನ್ನು —– ಎನ್ನುವರು? – ಕಲೀಫರು.

11) ಪ್ಯಾಲೆಸ್ತೈನ್ ದ ರಾಜಧಾನಿ ಯಾವುದು? – ಜರೂಸಲಮ್.
12) ಹಿಜರಿ ಶಕೆಯ —– ರಿಂದ ಪ್ರಾರಂಭ. – ಕ್ರಿಶ.622.
13) “ಕಂಡರಾಯ ಮಹಾದೇವ ಮಂದಿರ” ಎಲ್ಲಿದೆ? -ಖಜುರಾಹೊ.
14) “ಗುಲಾಬಿ ನಗರ” ಎಂದು ಯಾವುದನ್ನು ಕರೆಯುತ್ತಾರೆ? – ಜೈಪುರ.
15) “ಭಾರತದ ಕೋಟೆಗಳ ಕೊರಳ ಹಾರದ ಮುತ್ತು” ಎಂದು ಯಾವ ಕೋಟೆಯನ್ನು ಕರೆಯುತ್ತಾರೆ? – ಗ್ವಾಲಿಯರ್ ಕೋಟೆ.
16) ರಾಜಸ್ಥಾನದಲ್ಲೇ ದೊಡ್ಡದಾದ ಅರಮನೆ ಯಾವುದು? – ಉದಯಪುರ ಅರಮನೆ.
17) ಪುಷ್ಕರ್ ದಲ್ಲಿ ಯಾವ ಜಾತ್ರೆ ನಡೆಯುತ್ತದೆ? – ಒಂಟೆ.
18) ರಜಪೂತರ ಕಾಲಾವಧಿ ತಿಳಿಸಿ? – ಕ್ರಿಶ 650-1200.
19) ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಯಾವುದು? – ಕವಿರಾಜಮಾರ್ಗ.
20) “ಕೈಲಾಸ ದೇವಾಲಯ” ಎಲ್ಲಿದೆ? – ಎಲ್ಲೋರ.

21) ಎಲ್ಲೋರ ಮತ್ತು ಎಲಿಪೆಂಟಾ ಯಾವ ರಾಜ್ಯದಲ್ಲಿವೆ? – ಮಹಾರಾಷ್ಟ್ರ.
22) ಅಮೋಘವರ್ಷ ನೃಪತುಂಗನ ತಂದೆಯ ಹೆಸರೇನು? – ಮುಮ್ಮಡಿ ಗೋವಿಂದ.
23) “ಹೊಯ್ಸಳರ” ವಿಶ್ವವಿಖ್ಯಾತ ದೇವಾಲಯ ಯಾವುದು? – ಚೆನ್ನಕೇಶವ ದೇವಾಲಯ.
24) “ಚೆನ್ನಕೇಶವ ದೇವಾಲಯ” ಎಲ್ಲಿದೆ? – ಬೇಲೂರಿನಲ್ಲಿದೆ.
25) “ಕೇಶವ ದೇವಾಲಯ” ಎಲ್ಲಿದೆ? – ಸೋಮನಾಥಪುರ.
26) “ಗಿರಿಜಾ ಕಲ್ಯಾಣ” ಕೃತಿಯ ಕರ್ತೃ ಯಾರು? – ಹರಿಹರ.
27) “ಕಬ್ಬಿಗರ ಕಾವಂ” ಕೃತಿಯ ಕರ್ತೃ ಯಾರು? – ಆಂಡಯ್ಯ.
28) “ಬೃಹದೀಶ್ವರ ದೇವಾಲಯವು” ಯಾವ ರಾಜನ ಕೊಡುಗೆಯಾಗಿದೆ? – ರಾಜರಾಜಚೋಳನ.
29) ಶಿವಗುರು ಮತ್ತು ಆರ್ಯಾಂಭ ಯಾರ ತಂದೆ-ತಾಯಿ? – ಶಂಕರಾಚಾರ್ಯರ.
30) ಬದರಿ ಯಾವ ರಾಜ್ಯದಲ್ಲಿದೆ? – ಉತ್ತರಾಖಂಡ.

31) “ಚೆಲುವ ನಾರಾಯಣ ದೇವಾಲಯ” ಎಲ್ಲಿದೆ? – ಮೇಲುಕೋಟೆ.
32) ಬಸವೇಶ್ವರರು ಯಾವ ಜಿಲ್ಲೆಯ ಬಸವನ ಬಾಗೇವಾಡಿಯವರು? – ವಿಜಯಪುರ.
33) ಬಸವತತ್ವವನ್ನು ——- ಎಂದು ಕರೆಯುತ್ತಾರೆ? – ಶಕ್ತಿವಿಶಿಷ್ಟಾದ್ವೈತ.
34) “ದೇಹವೇ ದೇಗುಲ” ಎಂದವರು ಯಾರು? – ಬಸವೇಶ್ವರರು.
35 ) ಮದ್ವಾಚಾರ್ಯರು ಎಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು? – ಉಡುಪಿಯಲ್ಲಿ.
36) ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರೆಂದರೆ ಯಾರು? – ಅರಬ್ಬರು.
37) “ಕುತುಬ್ ಮೀನಾರ್” ಯಾರ ಕಾಲದಲ್ಲಿ ಪೂರ್ಣಗೊಂಡಿತು? – ಇಲ್ತಮಿಶ್.
38) ದಿಲ್ಲಿಯಲ್ಲಿ ಸಿರಿ ಎಂಬ ಕೋಟೆಯನ್ನು ಕಟ್ಟಿಸಿದವನು ಯಾರು? – ಅಲ್ಲಾವುದ್ದೀನ್ ಖಿಲ್ಜಿ.
39 ) “ಅಲೈ ದರ್ವಾಜಾ” ಎಲ್ಲಿದೆ? – ದಿಲ್ಲಿಯಲ್ಲಿದೆ.
40 ) ದಿಲ್ಲಿ ಸುಲ್ತಾನರ ಕಾಲದ ಬೃಹತ್ ಉದ್ಯಮ ಯಾವುದು? – ನೇಯ್ಗೆ.

41) ಉರ್ದುವಿನಲ್ಲಿ “ಪದ್ಮಾವತ್” ಎಂಬ ಸೂಫಿ ಕಾವ್ಯ ಬರೆದವನು ಯಾರು? – ಜಯಸಿ.
42) ಕುತುಬ್ ದ್ದೀನ್ ಐಬಕ್ ನ ಕಾಲಾವಧಿ ತಿಳಿಸಿ? – 1206-1210.
43) ರಜಿಯಾ ಸುಲ್ತಾನಳ ಕಾಲಾವಧಿ ತಿಳಿಸಿ? – 1236-1240.
44) ಮೊಗಲ್ ಆಳ್ವಿಕೆ ಆರಂಭವಾದದ್ದು ಯಾವಾಗ? – ಕ್ರಿಶ. 1526 ರಲ್ಲಿ.
45 ) ಮೀನಾರು ಎಂದರೆ —–. – ಎತ್ತರವಾದ ಸ್ತಂಭಗೋಪುರ.
46) ದಿಲ್ಲಿ ಸುಲ್ತಾನರ ಆಳ್ವಿಕೆಯ ಅವಧಿ ತಿಳಿಸಿ? – ಕ್ರಿಶ 1206 – 1526

Leave a Reply

Your email address will not be published. Required fields are marked *

error: Content Copyright protected !!