Current AffairsLatest Updates

ಇಂದಿನ ಪ್ರಚಲಿತ ವಿದ್ಯಮಾನಗಳು / 30-06-2025 (Today’s Current Affairs)

Share With Friends

ಇಂದಿನ ಪ್ರಚಲಿತ ವಿದ್ಯಮಾನಗಳು / Today’s Current Affairs

ಪದಾರ್ಪಣೆ ಪಂದ್ಯದಲ್ಲಿಯೇ 153 ರನ್ ಸಿಡಿಸಿ ಲುಹಾನ್ ಡ್ರೆ ಪ್ರಿಟೋರಿಯಸ್ ದಾಖಲೆ
Lhuan-dre Pretorius breaks world record in Test cricket
ಪದಾರ್ಪಣೆ ಪಂದ್ಯದಲ್ಲಿಯೇ ಅಮೋಘ ಶತಕ ಬಾರಿಸಿರುವ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಲುಹಾನ್ ಡ್ರೆ ಪ್ರಿಟೋರಿಯಸ್ ಅವರು ಪಾಕಿಸ್ತಾನದ ದಿಗ್ಗಜ ಜಾವೇದ್ ಮಿಯಾಂದಾದ್ ಹೆಸರಿನಲ್ಲಿದ್ದ ದಾಖಲೆಯನ್ನೂ ಮುರಿದಿದ್ದಾರೆ. ಆತಿಥೇಯ ಜಿಂಬಾಬೈ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೀರ್ಘ ಮಾದರಿಗೆ ಪದಾರ್ಪಣೆ ಮಾಡಿರುವ ಲುಹಾನ್, ಮೊದಲ ಇನಿಂಗ್ಸ್‌ನಲ್ಲಿ 153 ರನ್ ಬಾರಿಸಿದ್ದಾರೆ.

19 ವರ್ಷ 93 ದಿನಗಳಲ್ಲೇ 150ರ ಗಡಿ ದಾಟಿರುವ ಲುಹಾನ್, ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಅತಿ ಕಿರಿಯ ಬ್ಯಾಟರ್ ಎನಿಸಿದ್ದಾರೆ. ಇದುವರೆಗೆ ಈ ದಾಖಲೆ ಮಾಜಿ ಕ್ರಿಕೆಟಿಗೆ ಜಾವೇದ್ ಮಿಯಾಂದಾದ್ ಅವರ ಹೆಸರಿನಲ್ಲಿತ್ತು. ಮಿಯಾಂದಾದ್ ಅವರು 1976ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 163 ರನ್ ಗಳಿಸಿದ್ದರು. ಆಗ ಅವರ ವಯಸ್ಸು 19 ವರ್ಷ 119 ದಿನಗಳು.

ಸಾಕ್ಷ್ಯಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಆರ್‌ಬಿಐನ `ಚಿನ್ನದ ಖಜಾನೆ’ (Gold Reserves) ಅನಾವರಣ

ಕರ್ಣಾಟಕ ಬ್ಯಾಂಕ್ ಸಿಇಒ ಎಸ್. ಎಚ್.ಶರ್ಮಾ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ರಾಜೀನಾಮೆ
Srikrishnan Hari Hara Sarma resigns as CEO of Karnataka Bank
ಕರ್ಣಾಟಕ ಬ್ಯಾಂಕ್​​ನ ಸಿಇಒ ಶ್ರೀಕೃಷ್ಣನ್ ಹರಿಹರ ಶರ್ಮಾ (Srikrishnan Hari Hara Sarma) ಮತ್ತು ಕಾರ್ಯವಾಹಕ ನಿರ್ದೇಶಕ ಶೇಖರ್ ರಾವ್ (Sekhar Rao) ಅವರು ರಾಜೀನಾಮೆ ನೀಡಿದ್ದಾರೆ. ಈ ಇಬ್ಬರು ಟಾಪ್ ಎಕ್ಸಿಕ್ಯೂಟಿವ್​​ಗಳ ರಾಜೀನಾಮೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.

ವೈಯಕ್ತಿಕ ಕಾರಣ ನೀಡಿ ಇಬ್ಬರೂ ಸಂಸ್ಥೆಯಿಂದ ಹೊರಬರುತ್ತಿದ್ದಾರೆ. ಸಿಇಒ ಶ್ರೀಕೃಷ್ಣನ್ ಅವರು ಜುಲೈ 15ರವರೆಗೂ ಕಂಪನಿಯಲ್ಲಿ ಇರಲಿದ್ದಾರೆ. ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್ ಜುಲೈ 31ರಂದು ಬ್ಯಾಂಕ್​​ನಿಂದ ನಿರ್ಗಮಿಸಲಿದ್ದಾರೆ. ಈ ಬೆಳವಣಿಗೆ ಆದ ಬೆನ್ನಲ್ಲೇ ಇಂದು ಸೋಮವಾರ ಕರ್ಣಾಟಕ ಬ್ಯಾಂಕ್​ನ ಷೇರು ಬೆಲೆ (Karnataka bank share price) ತೀವ್ರ ಕುಸಿತಕ್ಕೆ ಸಿಲುಕಿದೆ. ಈ ವರದಿ ಬರೆಯುವ ವೇಳೆ ಅದರ ಷೇರುಬೆಲೆ ಇವತ್ತು ಶೇ. 5ರಷ್ಟು ಕಡಿಮೆ ಆಗಿದೆ. 207.65 ರೂ ಇದ್ದ ಬೆಲೆ ಈಗ 193 ರೂಗೆ ಕುಸಿದಿದೆ. ಇವತ್ತಿನ ಟ್ರೇಡಿಂಗ್ ಅವಧಿಯ ಒಂದು ಹಂತದಲ್ಲಿ ಷೇರುಬೆಲೆ 190 ರೂಗೆ ಕುಸಿದಿತ್ತು.

ಶ್ರೀಕೃಷ್ಣನ್ ಹರಿಹರ ಶರ್ಮಾ ಅವರು 2023ರ ಮೇ ತಿಂಗಳಲ್ಲಿ ಕರ್ಣಾಟಕ ಬ್ಯಾಂಕ್​​ನ ಸಿಇಒ ಆಗಿ ನೇಮಕವಾಗಿದ್ದರು. ಹೊರಗಿನಿಂದ ಆ ಬ್ಯಾಂಕ್​​ನ ಸಿಇಒ ಆದ ಮೊದಲ ವ್ಯಕ್ತಿ ಎನಿಸಿದ್ದಾರೆ. ಮೂರು ವರ್ಷದ ಅವಧಿಗೆಂದು ಅವರನ್ನು ನೇಮಕ ಮಾಡಲಾಗಿತ್ತು. ಇನ್ನು ಒಂದು ವರ್ಷ ಇರುವಂತೆಯೇ ಅವರೇ ಖುದ್ದಾಗಿ ನಿರ್ಗಮಿಸುತ್ತಿದ್ದಾರೆ.

ಜುಲೈ 1 : ರಾಷ್ಟ್ರೀಯ ವೈದ್ಯರ ದಿನ (National Doctor’s Day)

ಲಲಿತ್ ಮೋದಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯ ವಿಧಿಸಿರುವ 10.65 ಕೋಟಿ ರೂ.ಗಳ ದಂಡವನ್ನು ಪಾವತಿಸಲು ಬಿಸಿಸಿಐಗೆ ಆದೇಶ ನೀಡುವಂತೆ ಕೋರಿ ಮಾಜಿ ಕ್ರಿಕೆಟ್ ಆಡಳಿತಾಧಿಕಾರಿ ಲಲಿತ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಆದಾಗ್ಯೂ, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಆರ್.ಮಹಾದೇವನ್ ಅವರ ನ್ಯಾಯಪೀಠವು ಕಾನೂನಿನ ಪ್ರಕಾರ ಲಭ್ಯವಿರುವ ನಾಗರಿಕ ಪರಿಹಾರಗಳನ್ನು ಪಡೆಯಲು ಮೋದಿ ಅರ್ಹರಾಗಿದ್ದಾರೆ ಎಂದು ಹೇಳಿದರು. ಫೆಮಾ ಉಲ್ಲಂಘಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯವು ವಿಧಿಸಿದ 10.65 ಕೋಟಿ ರೂ.ಗಳ ದಂಡವನ್ನು ಪಾವತಿಸಲು ಬಿಸಿಸಿಐಗೆ ಆದೇಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಕಳೆದ ವರ್ಷ ಡಿಸೆಂಬರ್ 19 ರಂದು ವಜಾಗೊಳಿಸಿತ್ತು.

ಫೆಮಾ ಅಡಿಯಲ್ಲಿ ತೀರ್ಪು ನೀಡುವ ಪ್ರಾಧಿಕಾರವು ಮೋದಿಗೆ ದಂಡ ವಿಧಿಸಿರುವುದರಿಂದ ಅರ್ಜಿಯನ್ನು “ಕ್ಷುಲ್ಲಕ ಮತ್ತು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ” ಎಂದು ಹೈಕೋರ್ಟ್ ಹೇಳಿತ್ತು.ತಮ್ಮನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು, ಈ ಅವಧಿಯಲ್ಲಿ ಅವರು ಬಿಸಿಸಿಐನ ಉಪಸಮಿತಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು ಎಂದು ಮೋದಿ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.ಬೈಲಾಗಳ ಪ್ರಕಾರ ಬಿಸಿಸಿಐ ಅವರಿಗೆ ಪರಿಹಾರ ನೀಡಬೇಕಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.ಆದಾಗ್ಯೂ, ಹೈಕೋರ್ಟ್ ಪೀಠವು 2005 ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿತು.

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ
Booker Prize winner Banu Mushtaq to chair 88th Sahitya Sammelana in Ballari
ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಸಾಹಿತಿ ಬಾನು ಮುಷ್ತಾಕ್ ಅವರು 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ನೇತೃತ್ವದಲ್ಲಿ ಬಳ್ಳಾರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಎಲ್ಲಾ ಪದಾಧಿಕಾರಿಗಳು ಸರ್ವಾನುಮತದಿಂದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದಾರೆ.

ಬಾನು ಮುಷ್ತಾಕ್ ಅವರು ಬರೆದ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಗೆ ಇತ್ತೀಚೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿತ್ತು. ಇದೀಗ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಬಾನು ಮಷ್ತಾಕ್ ಅವರಿಗೆ ಮತ್ತೊಂದು ಗೌರವ ದೊರೆತಂತಾಗಿದೆ.

ಸಮುದಾಯ ನಾಯಕತ್ವಕ್ಕಾಗಿ ರಾಧಾನಾಥ ಸ್ವಾಮಿಯವರಿಗೆ ನ್ಯೂಯಾರ್ಕ್ ನಗರವು ಆಧ್ಯಾತ್ಮಿಕ ಗೌರವ
ರಾಧಾನಾಥ ಸ್ವಾಮಿಯವರನ್ನು ನ್ಯೂಯಾರ್ಕ್ ನಗರವು ಆಧ್ಯಾತ್ಮಿಕ ಮತ್ತು ಸಮುದಾಯ ನಾಯಕತ್ವಕ್ಕಾಗಿ ಗೌರವಿಸಿತು.ಜಾಗತಿಕವಾಗಿ ಗೌರವಿಸಲ್ಪಡುವ ಆಧ್ಯಾತ್ಮಿಕ ಶಿಕ್ಷಕ ಮತ್ತು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞೆ ಸಂಘ (ಇಸ್ಕಾನ್)ದ ಹಿರಿಯ ಸನ್ಯಾಸಿ ರಾಧಾನಾಥ್ ಸ್ವಾಮಿ ಅವರಿಗೆ ಭಕ್ತಿ ಕೇಂದ್ರದಲ್ಲಿ ಆಯೋಜಿಸಲಾದ ವಿಶೇಷ ಅಂತರ್ಧರ್ಮೀಯ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ನಗರದ ಗೌರವವನ್ನು ನೀಡಲಾಯಿತು. NYC ಅಧಿಕಾರಿಗಳು ನೀಡಿದ ಈ ಮನ್ನಣೆಯು, ಸಮುದಾಯ ಸೇವೆ, ಅಂತರ್ಧರ್ಮೀಯ ಸಂವಾದ ಮತ್ತು ಆಧ್ಯಾತ್ಮಿಕ ನಾಯಕತ್ವಕ್ಕೆ ಅವರ ದಶಕಗಳ ಬದ್ಧತೆಯನ್ನು ಕೊಂಡಾಡುತ್ತದೆ.

ರಾಧಾನಾಥ್ ಸ್ವಾಮಿ ಅವರನ್ನು ನ್ಯೂಯಾರ್ಕ್ ನಗರ ಆಡಳಿತವು ಗುರುತಿಸಿರುವುದು, ಹಿಂದೂ ಆಧ್ಯಾತ್ಮಿಕ ನಾಯಕರಾಗಿ ಮಾತ್ರವಲ್ಲದೆ ಜಾಗತಿಕ ಅಂತರ್ಧರ್ಮೀಯ ರಾಯಭಾರಿಯಾಗಿಯೂ ಅವರ ಪ್ರಭಾವವನ್ನು ಒತ್ತಿಹೇಳುತ್ತದೆ. “ಭವಿಷ್ಯದ ಅಡಿಪಾಯ” ಎಂಬ ವಿಷಯದ ಅಡಿಯಲ್ಲಿ ನಡೆದ ಈ ಕಾರ್ಯಕ್ರಮವು ಧಾರ್ಮಿಕ ಸಾಮರಸ್ಯಕ್ಕಾಗಿ ಹೆಚ್ಚುತ್ತಿರುವ ಮೆಚ್ಚುಗೆಯನ್ನು ಮತ್ತು ಬಹುಸಂಸ್ಕೃತಿ ಸಮಾಜಗಳಲ್ಲಿ ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುವಲ್ಲಿ ಆಧ್ಯಾತ್ಮಿಕ ನಾಯಕರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ.


ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು (Current Affairs in Kannada 2025)
Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್

error: Content Copyright protected !!