Current AffairsLatest Updates

ಇಂದಿನ ಪ್ರಚಲಿತ ವಿದ್ಯಮಾನಗಳು : 04-07-2024

Share With Friends
ಲ್ಯಾಗ್ರೇಂಜ್‌ ಪಾಯಿಂಟ್‌ನ ಮೊದಲ ಸುತ್ತು ಪೂರ್ಣಗೊಳಿಸಿದ ಆದಿತ್ಯ ಎಲ್‌-1 :

ಸೆಪ್ಟೆಂಬರ್ 2, 2023 ರಂದು ಉಡಾವಣೆಯಾದ ಭಾರತದ ಮೊದಲ ಸೂರ್ಯಯಾನದ ಆದಿತ್ಯ ಎಲ್–1 (Aditya L1) ಬಾಹ್ಯಾಕಾಶ ನೌಕೆಯು ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಆದಿತ್ಯ ಎಲ್–1 ಸೂರ್ಯನ ಸುತ್ತಲಿನ ಮೊದಲ ಹ್ಯಾಲೊ ಆರ್ಬಿಟ್ ಭೂಮಿ ಮತ್ತು ಸೂರ್ಯನ ಸುತ್ತಲಿನ ಎಲ್‌–1 ಪಾಯಿಂಟ್‌ನ ಪರಿಭ್ರಮಣೆಯನ್ನು ಪೂರ್ಣಗೊಳಿಸಿದೆ.

✦ ಸೂರ್ಯ ಮತ್ತು ಭೂಮಿ ನಡುವಿನ ಗುರುತ್ವಾಕರ್ಷಣೆ ನಿಷ್ಕ್ರಿಯವಾಗುವ ‘ಲ್ಯಾಗ್ರೇಂಜ್‌ ಪಾಯಿಂಟ್‌’ನ (L1) ಹ್ಯಾಲೊ ಆರ್ಬಿಟ್ (Halo) ಮೊದಲ ಸುತ್ತು ಪೂರ್ಣಗೊಳಿಸಿದೆ.
✦ ಆದಿತ್ಯ ಎಲ್–1 ನೌಕೆಯು ಈ ವರ್ಷದ ಜನವರಿ 6ರಿಂದ ಹ್ಯಾಲೊ ಆರ್ಬಿಟ್ ಪರಿಭ್ರಮಣೆಯನ್ನು ಆರಂಬಿಸಿತ್ತು. ಬಾಹ್ಯಾಕಾಶ ನೌಕೆಯು L1 ಪಾಯಿಂಟ್ ಪರಿಭ್ರಮಣೆ ಪೂರ್ಣಗೊಳಿಸಲು 178 ದಿನಗಳನ್ನು ತೆಗೆದುಕೊಂಡಿದೆ.
✦ ಬೆಂಗಳೂರಿನ ಯುಆರ್ ರಾವ್ ಸ್ಯಾಟಲೈಟ್ ಸೆಂಟರ್ (ಯುಆರ್‌ಎಸ್‌ಸಿ)ನಲ್ಲಿ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ಫ್ಲೈಟ್ ಡೈನಾಮಿಕ್ಸ್ ಸಾಫ್ಟ್‌ವೇರ್‌ನಿಂದಾಗಿ ಈ ಅಸಾಮಾನ್ಯ ಸಾಧನೆ ಮತ್ತು ನಿರ್ಣಾಯಕ ಕುಶಲತೆಯು ಸಾಧ್ಯವಾಯಿತು. ಕಕ್ಷೆಯನ್ನು ಪೂರ್ಣಗೊಳಿಸುವುದರಿಂದ ಸಾಫ್ಟ್‌ವೇರ್ ಅನ್ನು ಸಂಪೂರ್ಣವಾಗಿ ವಿಶ್ವಾಸಾರ್ಹಗೊಳಿಸಲಾಗಿದೆ ಮತ್ತು ಆದಿತ್ಯ-ಎಲ್1 ಮಿಷನ್‌ಗಳ ಸಾಮರ್ಥ್ಯವನ್ನು ಮೌಲ್ಯೀಕರಿಸಲಾಗಿದೆ.
✦ಸೆಪ್ಟೆಂಬರ್‌ 2ರಂದು ಆದಿತ್ಯ ಎಲ್‌ 1 ಮಿಷನ್‌ ಉಡಾವಣೆಯಾಗಿದ್ದು, ಸೆಪ್ಟೆಂಬರ್‌ 3ರಂದು ಮೊದಲ ಕಕ್ಷೆ ಬದಲಾವಣೆಯನ್ನು ಯಶಸ್ವಿಯಾಗಿ ಪೂರೈಸಿತು. ಸೆಪ್ಟೆಂಬರ್‌ 5ರಂದು ಎರಡನೇ ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡಿತು. ಒಟ್ಟು ಐದು ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡ ನಂತರ ಅಧ್ಯಯನ ನಡೆಸಲು ಉದ್ದೇಶಿಸಿರುವ ಲ್ಯಾಂಗ್ರೇಜ್‌ ಪಾಯಿಂಟ್‌ನತ್ತ ಆದಿತ್ಯ ಎಲ್‌ 1 ಮಿಷನ್‌ ಸಾಗಿದೆ.


ಬಾಬರ್ ದಾಖಲೆ ಮುರಿದ ಕುಸಾಲ್ ಪೆರೇರಾ


✦ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ (LPL 2024) ಸ್ಪೋಟಕ ಶತಕ ಬಾರಿಸಿದ ಕುಸಾಲ್ ಪೆರೇರಾ ಬಾಬರ್ ಆಝಂ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

✦ ಪಲ್ಲೆಕೆಲೆ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ದಂಬುಲ್ಲಾ ಸಿಕ್ಸರ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ ಶತಕ ಬಾರಿಸಿ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಕುಸಾಲ್ ಪೆರೇರಾ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಬಾಬರ್ ಆಝಂ ಹೆಸರಿನಲ್ಲಿತ್ತು. 2023 ರ ಎಲ್​ಪಿಎಲ್​ನಲ್ಲಿ ಕೊಲಂಬೊ ಸ್ಟ್ರಕರ್ಸ್ ಪರ ಕಣಕ್ಕಿಳಿದಿದ್ದ ಬಾಬರ್ 57 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇನ್ನು ಈ ಪಂದ್ಯದಲ್ಲಿ 52 ಎಸೆತಗಳನ್ನು ಎದುರಿಸಿದ ಕುಸಾಲ್ ಪೆರೇರಾ 5 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ ಅಜೇಯ 102 ರನ್ ಬಾರಿಸಿದರು.


ರಾಜಸ್ಥಾನ ಕೃಷಿ ಸಚಿವ ಕಿರೋಡಿಲಾಲ್​ ಮೀನಾ ರಾಜೀನಾಮೆ :

ರಾಜಸ್ಥಾನದ ರಾಜಕೀಯ(Rajasthan Politics)ದಲ್ಲಿನ ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಕ್ಯಾಬಿನೆಟ್ ಸಚಿವ ಡಾ.ಕಿರೋಡಿಲಾಲ್ ಮೀನಾ(Kirodi Lal Meena) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪೂರ್ವ ರಾಜಸ್ಥಾನಕ್ಕೆ ಸೇರಿದ ಮೀನಾ ಸಮುದಾಯದ ಹಿರಿಯ ನಾಯಕರಲ್ಲಿ ಡಾ. ಕಿರೋಡಿ ಲಾಲ್ ಮೀನಾ ಕೂಡ ಪ್ರಮುಖರು. ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ, ತಮ್ಮ ಉಸ್ತುವಾರಿಯಲ್ಲಿರುವ ಏಳು ಸ್ಥಾನಗಳಲ್ಲಿ ಒಂದಾದರೂ ಬಿಜೆಪಿ ಸೋತರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಪೂರ್ವ ರಾಜಸ್ಥಾನದಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಎಸ್​ಸಿಒ ಶೃಂಗಭೆಯಲ್ಲಿ ಪಾಲ್ಗೊಂಡ ವಿದೇಶಾಂಗ ಸಚಿವ ಜೈಶಂಕರ್

✦ಕಜಕಿಸ್ತಾನದ ಅಸ್ತಾನದಲ್ಲಿ ನಡೆದ ಎಸ್​ಸಿಒ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಎಸ್​ ಜೈಶಂಕರ್​ ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಸಂದೇಶವನ್ನು ವಿಶ್ವದ ನಾಯಕರಿಗೆ ತಲುಪಿಸಿದ್ದಾರೆ. ವಾಂಗ್ ಯಿ ಅವರನ್ನು ಭೇಟಿ ಮಾಡುವ ಮೊದಲು, ಜೈಶಂಕರ್ ಅವರು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಅವರನ್ನು ಭೇಟಿ ಮಾಡಿದ್ದಾರೆ. ಎಸ್‌ಸಿಒ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಮತ್ತು ವಿವಿಧ ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸಲು ಬಂದಿದ್ದ ಜೈಶಂಕರ್, ಬೆಲಾರಸ್ ಸಹವರ್ತಿ ಮ್ಯಾಕ್ಸಿಮ್ ರೆಜೆಂಕೋವ್ ಮತ್ತು ತಜಕಿಸ್ತಾನ್ ವಿದೇಶಾಂಗ ಸಚಿವ ಸಿರಾಜುದ್ದೀನ್ ಮುಹ್ರಿದ್ದಿನ್ ಅವರನ್ನು ಭೇಟಿಯಾದರು.
✦ಭಯೋತ್ಪಾದನೆ, ಹವಾಮಾನ ಬದಲಾವಣೆ, ಪ್ರಾದೇಶಿಕ ಸಮಗ್ರತೆಗೆ ಗೌರವ ನೀಡುವುದು, ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಸಂದೇಶವನ್ನು ಜೈಶಂಕರ್​ ರವಾನಿಸಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾಗವಹಿಸಿದ್ದರು.
✦ಮೇ ಅಂತ್ಯದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಇರಾನ್ ಮಾಜಿ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
✦9 ಸದಸ್ಯ ರಾಷ್ಟ್ರಗಳೊಂದಿಗೆ, ಭಾರತ, ಇರಾನ್, ಕಜಕಿಸ್ತಾನ್, ಚೀನಾ, ಕಿರ್ಗಿಜ್, ಪಾಕಿಸ್ತಾನ, ರಷ್ಯಾ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ – SCO ಪ್ರಭಾವಶಾಲಿ ಆರ್ಥಿಕ ಮತ್ತು ಭದ್ರತಾ ಬಣವಾಗಿ ಹೊರಹೊಮ್ಮಿದೆ.


ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಮತದಾನ ಆರಂಭ

ಯುನೈಟೆಡ್ ಕಿಂಗ್‌ಡಮ್‌ ಗುರುವಾರ ಐತಿಹಾಸಿಕ ಚುನಾವಣೆ ಎದುರಿಸುತ್ತಿದೆ. ಲಕ್ಷಾಂತರ ಮಂದಿ ಮತದಾರರು ಹೊಸ ಸರ್ಕಾರದ ಆಯ್ಕೆಗೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಭಾರತದ ಅಳಿಯ, ಹಾಲಿ ಪ್ರಧಾನಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಾರ್ಟಿ ಮರು ಆಯ್ಕೆ ಬಯಸಿದೆ. ಆದರೆ ಕಳೆದ ಒಂದೂವರೆ ದಶಕಗಳ ಕನ್ಸರ್ವೇಟಿವ್ ಆಡಳಿತಕ್ಕೆ ಮತದಾರ ಅಂತ್ಯ ಹಾಡಲು ಬಯಸಿದ್ದು, ವಿರೋಧ ಪಕ್ಷದ ಸ್ಥಾನದಲ್ಲಿರುವ ಲೇಬರ್ ಪಾರ್ಟಿ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಅಂದಾಜಿಸಿವೆ. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು ನಿಚ್ಚಳ ಬಹುಮತ ಪಡೆಯಲಿರುವ ಎಂದು ಸಮೀಕ್ಷೆಗಳು ಹೇಳಿವೆ.
✦ ಭಾರತ ಮೂಲದ ಮೊದಲ ಬ್ರಿಟಿಷ್ ಪ್ರಧಾನಿ ಎನಿಸಿರುವ ರಿಷಿ ಸುನಕ್, ಲೇಬರ್ ಪಕ್ಷ ಅಧಿಕಾರಕ್ಕೆ ಬಂದರೆ ವಿಪರೀತ ತೆರಿಗೆ ಹೊರೆಯ ಸಂಕಷ್ಟ ಎದುರಿಸಬೇಕಾಗಲಿದೆ. ಹೀಗಾಗಿ ಲೇಬರ್ ಪಾರ್ಟಿಗೆ ಬಹುಮತ ನೀಡದಂತೆ ಚುನಾವಣೆಗೂ ಮುನ್ನ ಮತದಾರರಿಗೆ ಕೊನೆಯ ಮನವಿ ಮಾಡಿದ್ದಾರೆ.
✦ 2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ನೇತೃತ್ವದಲ್ಲಿ ಕನ್ಸರ್ವೇಟಿವ್ ಪಕ್ಷವು ಭರ್ಜರಿ ಬಹುಮತದ ಗೆಲುವು ಸಾಧಿಸಿತ್ತು. ಆದರೆ ಅವಧಿ ಮುಗಿಯುವ ಆರು ತಿಂಗಳ ಮುನ್ನವೇ ರಿಷಿ ಸುನಕ್ ಅವರು ಸಾರ್ವತ್ರಿಕ ಚುನಾವಣೆ ಘೋಷಿಸಿದ್ದರು.
✦ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ನಾರ್ದರ್ನ್ ಐರ್ಲೆಂಡ್‌ನ 650 ಸಂಸತ್ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಮತದಾರರು ನಿರ್ಧರಿಸಲಿದ್ದಾರೆ. 4.60 ಕೋಟಿ ಅರ್ಹ ಮತದಾರರಿದ್ದಾರೆ.
✦2019ರ ಚುನಾವಣೆಯಲ್ಲಿ 27 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದ ರಿಚ್‌ಮಂಡ್ ಮತ್ತು ನಾರ್ಥಲೆರ್ಟನ್‌ನ ಯಾರ್ಕ್‌ಶೈರ್ ಕ್ಷೇತ್ರದಲ್ಲಿ ರಿಷಿ ಸುನಕ್ ಅವರಿಗೆ ಸೋಲಿನ ಭೀತಿ ಎದುರಾಗಿದೆ.
✦2019ರ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಕ್ಷವು 365 ಸೀಟುಗಳನ್ನು ಗೆಲ್ಲುವ ಮೂಲಕ ಮರಳಿ ಅಧಿಕಾರ ಹಿಡಿದಿತ್ತು. ಲೇಬರ್ ಪಕ್ಷವು 202 ಸ್ಥಾನ ಗಳಿಸಿತ್ತು. ಎಸ್‌ಎನ್‌ಪಿ 48 ಮತ್ತು ಲಿಬರಲ್ ಡೆಮಾಕ್ರಾಟ್ಸ್ 11 ಸ್ಥಾನಗಳನ್ನು ಪಡೆದಿದ್ದವು. ಕಳೆದ ಎಂಟು ವರ್ಷಗಳಲ್ಲಿ ಐದು ಬೇರೆ ಬೇರೆ ಪ್ರಧಾನಿಗಳನ್ನು ಕಂಡಿರುವ ಕನ್ಸರ್ವೇಟಿವ್ ಪಕ್ಷಕ್ಕೆ ಆಡಳಿತವಿರೋಧಿ ಅಲೆ ಎರವಾಗುವ ಭಯ ಕಾಡುತ್ತಿದೆ. ಈ ಬಾರಿ ಲೇಬರ್ ಪಕ್ಷವು ಬಹುಮತಕ್ಕೆ ಅಗತ್ಯವಿರುವ 326 ಸೀಟುಗಳನ್ನು ಸುಲಭವಾಗಿ ದಾಟುವ ನಿರೀಕ್ಷೆ ಇದೆ.


ವಿಶ್ವಸಂಸ್ಥೆ ಸಭೆಯಲ್ಲಿ ಮೊದಲ ಬಾರಿಗೆ ತಾಲಿಬಾನ್​ ಪ್ರತಿನಿಧಿಗಳು ಭಾಗಿ

✦ ಕತಾರ್ ರಾಜಧಾನಿ ದೋಹಾದಲ್ಲಿ ನಡೆದ ವಿಶ್ವಸಂಸ್ಥೆಯ ನೇತೃತ್ವದ ಸಭೆಯಲ್ಲಿ ತಾಲಿಬಾನ್​ ಮೊದಲ ಬಾರಿಗೆ ಭಾಗವಹಿಸಿದೆ. ತಾಲಿಬಾನ್​ ಪ್ರತಿನಿಧಿಗಳು ಅಂತಾರಾಷ್ಟ್ರೀಯ ಮಟ್ಟದ ಮಾತುಕತೆಗಳಲ್ಲಿ ಭಾಗವಹಿಸಿರುವುದು ಇದೇ ಮೊದಲು. ಸಭೆಯಲ್ಲಿ ತಾಲಿಬಾನ್​​ ಭಾಗವಹಿಸುವಿಕೆಯು ವಿಶ್ವದಾದ್ಯಂತ ಮಹಿಳಾ ಹಕ್ಕುಗಳ ಕಾರ್ಯಕರ್ತರಿಂದ ಆಕ್ರೋಶಕ್ಕೆ ಕಾರಣವಾಯಿತು.

✦ ಸಭೆಯಲ್ಲಿ ಭಾರತ ಸೇರಿದಂತೆ ಒಟ್ಟು 25 ದೇಶಗಳು ಭಾಗವಹಿಸಿದ್ದವು. ತಾಲಿಬಾನ್ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದ. ಆದರೆ ತಾಲಿಬಾನ್ ಸಭೆಯಲ್ಲಿ ಭಾಗವಹಿಸುವುದರಿಂದ ಅವರ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಗುತ್ತಿದೆ ಎಂದು ಅರ್ಥವಲ್ಲ ಎಂದು ಯುಎನ್ ಸ್ಪಷ್ಟಪಡಿಸಿದೆ.

✦ ಸಭೆಯಲ್ಲಿ ವಿಶೇಷವಾಗಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿಯನ್ನು ಚರ್ಚಿಸಲಾಯಿತು. ಅನೇಕರು ಅಫ್ಘಾನಿಸ್ತಾನದಲ್ಲಿ ಮಹಿಳೆಯರ ದುಃಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

✦ ಕಳೆದ ಎರಡೂವರೆ ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವಿದೆ. ಅಫ್ಘಾನಿಸ್ತಾನ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ನೇತೃತ್ವದ ಐದು ಸದಸ್ಯರ ತಾಲಿಬಾನ್ ನಿಯೋಗ ಸಭೆಯಲ್ಲಿ ಭಾಗವಹಿಸಿತು.

✦ದೋಹಾ ಸಭೆಯಲ್ಲಿ ನಮ್ಮ ಭಾಗವಹಿಸುವಿಕೆಯು ಅಫ್ಘಾನಿಸ್ತಾನದ ಇಸ್ಲಾಮಿಕ್ ಆಡಳಿತವು ಸಕಾರಾತ್ಮಕ ನಿಶ್ಚಿತಾರ್ಥಕ್ಕೆ ಬದ್ಧವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಮುಜಾಹಿದ್ ಹೇಳಿದರು.

✦ ಈ ಹಿಂದೆ, ಅಫ್ಘಾನಿಸ್ತಾನದಲ್ಲಿ ನಡೆದ ಮೊದಲ ಸಭೆಗೆ ವಿಶ್ವಸಂಸ್ಥೆ ತಾಲಿಬಾನ್‌ಗಳನ್ನು ಆಹ್ವಾನಿಸಿರಲಿಲ್ಲ. ಎರಡನೇ ಸಭೆಗೆ ಸಂಬಂಧಿಸಿದಂತೆ, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಸಭೆಯಲ್ಲಿ ಭಾಗವಹಿಸಲು ಸ್ವೀಕಾರಾರ್ಹವಲ್ಲದ ಷರತ್ತುಗಳನ್ನು ತಾಲಿಬಾನ್​ ಮುಂದಿಟ್ಟಿದ್ದರು. ಇದರಲ್ಲಿ ಆಫ್ಘನ್ ನಾಗರಿಕ ಸಮಾಜದ ಸದಸ್ಯರನ್ನು ಮಾತುಕತೆಯಿಂದ ಹೊರಗಿಡಬೇಕು. ತಾಲಿಬಾನ್ ದೇಶದ ಕಾನೂನುಬದ್ಧ ಆಡಳಿತಗಾರರಾಗಿ ಗುರುತಿಸಲ್ಪಡಬೇಕು ಎಂಬುದಾಗಿತ್ತು.


ಭಾರತದಲ್ಲಿ ಬಡತನ ಪ್ರಮಾಣದಲ್ಲಿ ಕುಸಿತ :

✦ ಭಾರತ ದೇಶಾದ್ಯಂತ ಬಡತನ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. 2011 – 2012ರಲ್ಲಿ ಭಾರತದ ಒಟ್ಟು ಜನಸಂಖ್ಯೆ ಪೈಕಿ ಶೇ. 21ರಷ್ಟು ಮಂದಿ ಬಡತನದಲ್ಲಿದ್ದರು. ಆದರೆ ಇದೀಗ ಬಡತನ ಪ್ರಮಾಣ ಕೇವಲ ಶೇ. 8.5ಕ್ಕೆ ಕುಸಿತ ಕಂಡಿದೆ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

✦ ಭಾರತದ ಮಾನವ ಸಂಪನ್ಮೂಲ ಅಭಿವೃದ್ದಿ ಸಮೀಕ್ಷೆಯಲ್ಲಿ ಈ ಅಂಕಿ ಅಂಶ ಹೊರಬಿದ್ದಿದೆ. ತೆಂಡೊಲ್ಕರ್ ಸಮಿತಿಯ ಸೂತ್ರಗಳನ್ನು ಆಧರಿಸಿ ಹಣದುಬ್ಬರ ಸೇರಿದಂತೆ ಹಲವು ವಿಚಾರಗಳನ್ನ ಗಣನೆಗೆ ತೆಗೆದುಕೊಂಡು ಬಡತನ ರೇಖೆಯನ್ನು ನಿರ್ಧರಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಬಡತನದ ಕುರಿತಾಗಿ ರಚನೆ ಹಾಗೂ ಜಾರಿಗೆ ಈ ವರದಿ ಮಹತ್ವದ ಕೊಡುಗೆ ನೀಡಲಿದೆ.

✦ವಿಶ್ವ ಸಂಸ್ಥೆ 2017ರಲ್ಲಿ ಖರೀದಿ ಸಾಮರ್ಥ್ಯ ಮಾನದಂಡವನ್ನು ಆಧಾರವಾಗಿ ಇಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಡತನ ರೇಖೆಯನ್ನು 2.15 ಡಾಲರ್‌ಗೆ ಸೀಮಿತ ಮಾಡಿತ್ತು.ಎನ್‌ಸಿಎಇಆರ್‌ ಚಿಂತನಾ ಸಂಸ್ಥೆಯ ಮುಖ್ಯಸ್ಥ ಹಣಕಾಸು ತಜ್ಞ ಸೋನಲ್ದೇ ದೇಸಾಯಿ ಅವರ ಸಾರಥ್ಯದ ತಂಡವು ಈ ಅದ್ಯಯನ ವರದಿ ಸಿದ್ದಪಡಿಸಿದೆ.

✦ ಭಾರತದಲ್ಲಿ ಬಹುತೇಕ ಗ್ರಾಮೀಣ ಭಾಗದಲ್ಲಿ ಬಡತನ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ವರದಿ ಹೇಳಿದೆ. 2011 – 12 ರಲ್ಲಿ ಗ್ರಾಮೀಣ ಭಾಗದಲ್ಲಿ ಬಡತನ ಪ್ರಮಾಣ ಶೇ. 24.8ರಷ್ಟು ಇತ್ತು. ಇದೀಗ ಶೇ. 8.6ಕ್ಕೆ ಕುಸಿತ ಕಂಡಿದೆ. ಇನ್ನು ನಗರ ಪ್ರದೇಶದಲ್ಲಿ ಬಡತನ ಪ್ರಮಾಣ ಶೇ. 13.4 ರಷ್ಟಿತ್ತು. ಇದೀಗ ಶೇ. 8.4ಕ್ಕೆ ಕುಸಿತ ಕಂಡಿದೆ. ಇತ್ತೀಚೆಗೆ ಎಸ್‌ಬಿಐ ನಡೆಸಿದ್ದ ಸಮೀಕ್ಷೆಗಿಂತಲೂ ಈ ಸಮೀಕ್ಷೆಯ ಅಂಕಿ ಅಂಶದಲ್ಲಿ ಸ್ಪಲ್ಪ ಏರಿಕೆ ಕಂಡು ಬಂದಿದೆ.

✦ ಗೃಹ ಬಳಕೆ ಖರ್ಚು ವೆಚ್ಚಗಳ ಸಮೀಕ್ಷೆ ಪ್ರಕಾರ ಗ್ರಾಮೀಣ ಭಾಗದಲ್ಲಿ ಬಡತನ ಶೇ. 7.2 ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ. 4.6ರಷ್ಟು ಇದೆ ಎಂದು ಎಸ್‌ಬಿಐ ಸಮೀಕ್ಷೆ ಹೇಳಿತ್ತು.

✦ ಕಳೆದ ಮಾರ್ಚ್‌ನಲ್ಲಿ ಆರ್‌ಬಿಐ ಮಾಜಿ ಗವರ್ನರ್ ಸಿ. ರಂಗರಾಜನ್ ಹಾಗೂ ಆರ್ಥಿಕ ತಜ್ಞ ಎಸ್. ಮಹೇಂದ್ರ ದೇವ್ ಅವರು ಭಾರತದ ಬಡತನ ಪ್ರಮಾಣ 2022 – 23 ರಲ್ಲಿ ಶೇ. 10.8ಕ್ಕೆ ಕುಸಿತ ಕಂಡಿದೆ ಎಂದು ಹೆಳಿದ್ದರು.

✦ ನೀತಿ ಆಯೋಗದ ಸಿಇಒ ಬಿ. ವಿ. ಆರ್. ಸುಬ್ರಹ್ಮಣ್ಯಂ ಅವರು ಭಾರತದ ಬಡತನ ಮಟ್ಟ ಶೇ. 5ಕ್ಕಿಂತಾ ಕಡಿಮೆ ಇದೆ ಎಂದು ಹೇಳಿದ್ದರು. ಆಹಾರಕ್ಕೆ ಸರ್ಕಾರ ಸಾಕಷ್ಟು ಸಬ್ಸಿಡಿ ನೀಡುತ್ತಿದೆ. ಜೊತೆಯಲ್ಲೇ ಪಡಿತರ ವಿತರಣಾ ವ್ಯವಸ್ಥೆ ಸುಧಾರಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವು ಯೋಜನೆಗಳ ಅಡಿ ಜನರಿಗೆ ಹಲವು ಪ್ರಯೋಜನಗಳು ಸಿಗುತ್ತಿರುವ ಕಾರಣ ಬಡತನ ಪ್ರಮಾಣ ಗಣನೀಯ ಸುಧಾರಣೆ ಕಂಡಿದೆ.


‘ಸಂಪೂರ್ಣತಾ ಅಭಿಯಾನ’ ಆರಂಭಿಸಿದ NITI ಆಯೋಗ್

ಭಾರತದ ಅತ್ಯಂತ ಸವಾಲಿನ ಪ್ರದೇಶಗಳ ಅಭಿವೃದ್ಧಿಯನ್ನು ವೇಗಗೊಳಿಸುವ ಮಹತ್ವದ ಕ್ರಮದಲ್ಲಿ, NITI ಆಯೋಗವು ಜುಲೈ 4, 2024 ರಂದು ‘ಸಂಪೂರ್ಣತ ಅಭಿಯಾನ’ವನ್ನು ಪ್ರಾರಂಭಿಸಿದೆ. ಈ ಮಹತ್ವಾಕಾಂಕ್ಷೆಯ 3-ತಿಂಗಳ ಅಭಿಯಾನವು 112 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು 500 ಪ್ರಮುಖ ಸೂಚಕಗಳಲ್ಲಿ ಶುದ್ಧತ್ವವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು, ಸಮಗ್ರ ಬೆಳವಣಿಗೆಯತ್ತ ಭಾರತದ ಪ್ರಯಾಣದಲ್ಲಿ ಹೊಸ ಅಧ್ಯಾಯವನ್ನು ಗುರುತಿಸುತ್ತದೆ.


46ನೇ UNESCO ವಿಶ್ವ ಪರಂಪರೆ ಸಮಿತಿಯ ಅಧಿವೇಶನ ಆಯೋಜಿಸಲಿದೆ ಭಾರತ

ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆಯ ಒಂದು ಹೆಗ್ಗುರುತಾಗಿ, ರಾಷ್ಟ್ರವು ಜುಲೈ 21-31, 2024 ರಿಂದ ಯುನೆಸ್ಕೋ ವಿಶ್ವ ಪರಂಪರೆಯ ಸಮಿತಿಯ 46 ನೇ ಅಧಿವೇಶನವನ್ನು ಆಯೋಜಿಸಲು ಸಜ್ಜಾಗಿದೆ. ಈ ಪ್ರತಿಷ್ಠಿತ ಕೂಟವು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದ್ದು, ಪ್ರತಿನಿಧಿಗಳನ್ನು ಒಟ್ಟುಗೂಡಿಸುತ್ತದೆ.


ಹೊಸ ಡಚ್ ಪ್ರಧಾನಿಯಾಗಿ ಡಿಕ್ ಸ್ಕೂಫ್ ಪ್ರಮಾಣ ವಚನ

ಮಾಜಿ ಬೇಹುಗಾರಿಕಾ ಮುಖ್ಯಸ್ಥ ಡಿಕ್ ಸ್ಕೂಫ್ (Dick Schoof) ಹೊಸ ಡಚ್ ಪ್ರಧಾನ ಮಂತ್ರಿಯಾಗಿದ್ದು, ಬಲಪಂಥೀಯ ಸಮ್ಮಿಶ್ರವನ್ನು ಮುನ್ನಡೆಸುವ ಮೂಲಕ “ಕಠಿಣ-ಎಂದಿಗೂ” ವಲಸೆ ನೀತಿಯನ್ನು ಜಾರಿಗೆ ತರಲು ಗಮನಹರಿಸಿದ್ದಾರೆ. 67 ವರ್ಷದ ಸ್ಕೂಫ್, ಈ ಹಿಂದೆ ಡಚ್ ಸೀಕ್ರೆಟ್ ಸರ್ವೀಸ್‌ನ ಮುಖ್ಯಸ್ಥರಾಗಿದ್ದರು ಮತ್ತು 14 ವರ್ಷಗಳ ಕಾಲ ಅಧಿಕಾರದಲ್ಲಿ ಸೇವೆ ಸಲ್ಲಿಸಿದ ಮಾರ್ಕ್ ರುಟ್ಟೆ ಅವರಿಂದ ಅಧಿಕಾರ ವಹಿಸಿಕೊಂಡರು


ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರಾಗಿ ಡಾ.ಬಿ.ಎನ್. ಗಂಗಾಧರ್ ನೇಮಕ

ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರಾಗಿ ಡಾ.ಬಿ.ಎನ್. ಗಂಗಾಧರ್ ನೇಮಕವಾಗಿದ್ದಾರೆ. ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಆಡಳಿತವನ್ನು ಉತ್ತೇಜಿಸುವ ಮಹತ್ವದ ಕ್ರಮದಲ್ಲಿ, ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (NMC) ಹಲವಾರು ಉನ್ನತ ಮಟ್ಟದ ನೇಮಕಾತಿಗಳನ್ನು ಪ್ರಕಟಿಸಿದೆ. ಈ ನೇಮಕಾತಿಗಳು ದೇಶದ ಅತ್ಯುನ್ನತ ವೈದ್ಯಕೀಯ ಶಿಕ್ಷಣ ನಿಯಂತ್ರಕಕ್ಕೆ ಹೊಸ ದೃಷ್ಟಿಕೋನಗಳು ಮತ್ತು ಪರಿಣತಿಯನ್ನು ತರುವ ನಿರೀಕ್ಷೆಯಿದೆ.



Leave a Reply

Your email address will not be published. Required fields are marked *

error: Content Copyright protected !!